ವಂಶವಾಹಿನಿ ಯಲ್ಲಿ ದೋಷ ಹೊಂದಿದ ಮೈಸೂರಿನ ದಂಪತಿಗೆ ಆರೋಗ್ಯವಂತ ಮಗು
ಜನಿಸುವಂತೆ ಮಾಡುವ ಮೂಲಕ ಗುಣಶೀಲ ಸರ್ಜಿಕಲ್ & ಬ್ಯಾಟರ್ನಿಟಿ ಆಸ್ಪತ್ರೆಯು ಇನ್ನೊಂದು ಹಿರಿಮೆಯನ್ನು
ತನ್ನದಾಗಿಸಿಕೊಂಡಿದೆ. ಸಿಕಲ್ ಸೆಲ್ ರೋಗ ಹೊಂದಿದ್ದ ಈ ದಂಪತಿಯ ಎಚ್ಬಿಬಿ ವಂಶವಾಹಿನಿಯನ್ನು ತಿದ್ದದೆಯೇ ಇವರ
ಹೆಣ್ಣು ಮಗುವಿಗೆ ಈ ರೋಗ ವರ್ಗಾವಳಿಯಾಗದಂತೆ ನೋಡಿಕೊಳ್ಳುವ ಮೂಲಕ ವೈದ್ಯರು ವಿಶೇಷ ಸಾಧನೆ ಮೆರೆದಿದ್ದಾರೆ.
ಡಾ, ವಾಣಿಶ್ರೀ (35 ವರ್ಷ) ಅವರು ಮಹಾರಾಷ್ಟ್ರ ಮೊಲದ ಶ್ರೀ ಆಲೋಕ ಕಾಳೆಯವರ ನ್ನು ವಿವಾಹವಾಗಿ ಪ್ರಸ್ತುತ
ಮೈಸೂರಿನಲ್ಲಿ ನೆಲೆಸಿದ್ದಾರೆ. ಇಬ್ಬರೂ ತಮ್ಮ ವಂಶವಾಹಿನಿ ಯಲ್ಲಿ ಸಿಕಲ್ ಸೆಲ್ ವಂಶವಾಹಿನಿಯ ಸಮಸ್ಯೆ ಹೊಂದಿರುವುದರಿಂದ
ಅವರಿಗೆ ಮಗು ಪಡೆಯುವುದು ಆತಂಕದ ಸಂಗಾತಿಯಾಗಿ ಪರಿಣಮಿಸಿತ್ತು. ಮದುವೆಯಾಗಿ ನಾಲ್ಕು ವರ್ಷವಾದರೂ ಮಗು
ಪಡೆಯುವ ಅವರ ಪ್ರಯತ್ನ ಫಲ ನೀಡಿರಲಿಲ್ಲ. ಜೊತೆಗೆ, ಒಂದು ವೇಳೆ ಗರ್ಭಧಾರಣೆಯ ಆದರೂ ತಮ್ಮ ಮಗು ಕೂಡ ಸಿಕಲ್
ಸೇಲ್ ರೋಗ ದೊಂದಿಗೆ ಜನಿಸುತ್ತದೆ ಎಂದು ಅವರು ಆತಂಕಗೊಂಡಿದ್ದನು
ಸಿಕಲ್ ಸೆಲ್ ರೋಗವೆಂಬುದು ಬರಹಕ್ಕೆ ಸಂಬಂಧಿಸಿದ ಅತ್ಯಂತ ಗಂಭೀರವಾದ, ಆದರೆ ಅಷ್ಟೇ ಸಾಮಾನ್ಯವಾದ ಅನಾರೋಗ್ಯದ
ಸಮಸ್ಯೆ, ಮನುಷ್ಯನ ದೇಹದಲ್ಲಿ ಬೀಟಾ-ಗೋಬಿನ್ ಸರಣಿಯಲ್ಲಿರುವ ಎ. ವರ್ಣತಂತುವಿನ ಸಮಸ್ಯೆಯಿಂದ ಇದು
ಉಂಟಾಗುತ್ತದೆ. ಮಗುವು ತನ್ನ ತಂದೆ ಹಾಗೂ ತಾಯಿ ಯಿಂದ ತಲಾ ಒಂದೊಂದು ಅನಾರೋಗ್ಯಪೀಡಿತ ವರ್ಣತಂತು ವನ್ನು
ಪಡೆದುಕೊಂಡಿದ್ದರೆ ಈ ರೋಗದೊಂದಿಗೆ ಜನಿಸುತ್ಪದೆ.