ಮೈಸೂರು: ಸಮಾಜ ಸೇವೆಯ ನೇಕಾರ ಉಡ: ಮಹೇಂದ್ರ ಸಿಂಗ್ ರಾಜ್ ಪುರೋಹಿತ್ (ಕಾಳಪ್ಪ)
“ಸೇವೆಯೇ ಪರಮ ಗುರಿ” ಸೇವೆಯಲ್ಲಿಯೇ ದೇವರನ್ನು ಕಾಣು ಎಂಬುದಕ್ಕೆ ನಿದರ್ಶನವಾಗಿರುವವರು
ಬನ್ನೂರು ಡಾ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ (ಕಾಳಪ್ಪ) ಇವರು ರಾಜಸ್ಥಾನದ ಜೋಡಪರ
ಜಿಲ್ಲೆಯಿಂದ ಮೈಸೂರು ಜಿಲ್ಲೆಯ ಬನ್ನೂರು ಪಟ್ಟಣ ಕ್ಕೆ ಬಂದು ಸಲ್ಲಿಸಿರುವ ಇವರು ಅಪಾರ
ದೈವಭಕ್ತರಾಗಿದ್ದು, ಹಲವಾರು ದೇವಾಲಯದ ಜೀರ್ಣೋದ್ಧಾರ ಮಾಡಿರುತ್ತಾರೆ. ಹಲವಾರು ಸಂಘ
ಸಂಸ್ಥೆ ಗಳಲ್ಲಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿರುತ್ತಾರೆ. ಇವರು ದೈಹಿಕ ಅಂಗವಿಕಲ ಮಕ್ಕಳ ಎಳಿಗೆಗಾಗಿ,
ಪರಿಸರ ಸಂರಕ್ಷಣೆಗಾಗಿ ಹಲವಾರು ಕಾರ್ಯಗಳನ್ನು ನಿರ್ವಹಿಸಿರುತ್ತಾರೆ. ಹಾಗೂ ಗ್ರಾಮಾಂತರ ಪ್ರದೇಶದ
ಅಂಗನವಾಡಿಯನ್ನು ದತ್ತು ಪಡೆದು ಅಲ್ಲಿ ಮೂಲ ಸೌಕರ್ಯ ಒದಗಿಸಿ ರುತ್ತಾರೆ. ಇವರು ಅಪಾರ
ಸೇವೆಯನ್ನು ಗುರುತಿಸಿ, ಹಲವಾರು ಗಣ್ಯ ವ್ಯಕ್ತಿಗಳಿಂದ ಗೌರವಿಸಲ್ಪಟ್ಟಿರುತ್ತಾರೆ.

ಪಂಕಜಾ ರವಿಶಂಕರ್:
ಪಂಕಜ ಇವರು ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು ಇವರು ಈ ಮುಂಚಿನಿಂದಲೂ ಹಲವಾರು
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇವರು 9ನೇ ವಯಸ್ಸಿನಿಂದಲೆ: ಹಲವಾರು ಖ್ಯಾತ ನಾಟಕ.
ಕಂಪನಿ ಅಂದರೆ ಗುಬ್ಬಿ ಕಂಪನಿ ಇನ್ನು ಮುಂತಾದ ಹೆಸರಾಂತ ನಾಟಕ ಕಂಪನಿಗಳಲ್ಲಿ ಕಲಾವಿದೆಯಾಗಿ
ನಟಿ ಸಿ, ಜನ ಮನ್ನಣೆ ಗಳಿಸಿರುತ್ತಾರೆ. ಇವರಿಗೆ ಕಿತ್ತೂರು ರಾಣಿ ಚೆನ್ನಮ್ಮ, ಇನ್ನೂ ಮುಂತಾದ ಹಲವಾರು
ಬಿರುದು ಬಾವಲಿಗಳು ಲಭಿಸಿರುತ್ತವೆ. ಅಲ್ಲದೇ ಇವರ ಅಪಾರವಾದ ಕಲಾ ಸೇವೆಯನ್ನು ಗುರುತಿಸಿ,
ಕರ್ನಾಟಕ ರಾಜ್ಯ ಸರ್ಕಾರದವರು ಇವರನ್ನು ಸನ್ಮಾನಿಸಿರುತ್ತಾರೆ.
ಅನಸೂಯ ಸುದರ್ಶನ್:
ಇವರು ಮೈಸೂರು ಮೂಲದ ವಾಗಿದ್ದು, ಇವರು ಸುಗಮ ಸಂಗೀತ ಹಾಗೂ ಶಾಸ್ತ್ರೀಯ
ಸಂಗೀತದಲ್ಲಿ ಅಪಾರವಾದ ಸಾಧನೆಗಳನ್ನು ಮಾಡಿ ಹಲವಾರು ಸಂಘ ಸಂಸ್ಥೆಗಳಿಂದ
ಗೌರವಿಸಲ್ಪಟ್ಟಿರುತ್ತಾರೆ ಅಲ್ಲದೇ ಇವರು ಗಿರಿದರ್ಶಿನಿ ಮಹಿಳಾ ಸೇವಾ ಸಂಘದ ಮೂಲಕ ಸಮಾಜ
ಸೇವೆಯನ್ನು ಸಹ ಸಲ್ಲಿಸುತ್ತಿದ್ದು, ಇವರು ಸದರಿ ಸಂಘದ ನಿರ್ದೇಶಕರಾಗಿರುತ್ತಾರೆ. ಇವರು ಮಕ್ಕಳಿಗೆ
ಸಂಗೀತವನ್ನು ಕಲಿಸಿ ಕೊಡುವ ಮೂಲಕ ಈ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಮೇಲ್ಕಂಡ ಮೂರು
ಜನರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆಗಳನ್ನು ಮಾಡಿದ್ದು, ಇವರು ಗಳಿಗೆ ಗೌರವ
ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಲಾಗಿರುತ್ತದೆ.