ಮೈಸೂರಿನಲ್ಲಿನಡೆಸಿದಹೋರಾಟದಫಲದೊರೆತಿದೆ.
ಇಂದಿನಿಂದ ಮೈಸೂರಿನಲ್ಲಿ ಡಾ.ವಿಷ್ಣು ಅಪ್ಪಾಜಿಯವರ ಸ್ಮಾರಕದ ಕಾಮಗಾರಿ ಆರಂಭ. ಅಂತು ವಿ.ಎಸ್.ಎಸ್ ವಿಷ್ಣು ಸೇನಾ ಸಂಘಟನೆ ನಡೆಸಿದ ಎರಡು ದಿನದ ಉಪವಾಸ ಸತ್ಯಾಗ್ರಹದ ಹೋರಾಟ ಕೈ ಹಿಡಿದಿದೆ. ಅಂದು ಪಟ್ಟಂತಹ ಶ್ರಮ ವ್ಯರ್ಥವಾಗಲಿಲ್ಲ ಆ ದೇವರು ಅದಕ್ಕೆ ತಕ್ಕ ಫಲವನ್ನೇ ನೀಡಿದ್ದಾನೆ. ಯಾವುದೇ ಸರ್ಕಾರದ ಪ್ರಯತ್ನವಿಲ್ಲದೆ ನಮಗೆ ಕಾನೂನಾತ್ಮಕವಾಗಿ ನ್ಯಾಯ ದೊರೆತಿದೆ. ಮೈಸೂರು ತಹಸೀಲ್ದಾರ್ ರಮೇಶ್ ಬಾಬು ರವರ ಪರಿಶ್ರಮ ಹಾಗು ಭಾರತಿ ವಿಷ್ಣುವರ್ಧನ್ ರವರ ಪರಿಶ್ರಮದ ಫಲವಾಗಿ….
ಇನ್ನೂ ನಮ್ಮ ಮುಂದಿನ ಗುರಿ ಡಾ.ವಿಷ್ಣು ಅಪ್ಪಾಜಿಯವರ ಪುಣ್ಯ ಭೂಮಿಗಾಗಿ ಶೀಘ್ರದಲ್ಲೇ ವಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ರಾಜುಗೌಡರ ನೇತೃತ್ವದಲ್ಲಿ ಅದರ ಕೆಲಸಗಳು ಮತ್ತೆ ಶುರುವಾಗಲಿದೆ ಇದಕ್ಕೆ ಅಭಿಮಾನಿಗಳು ಸಹ ಕೈ ಜೋಡಿಸಬೇಕು.